ವಚನ - 361     
 
ಒಂದು ಮೂಲಸ್ತಂಭವಿಡಿದ ದೇವಾಲಯದಲ್ಲಿ ಚಂದಚಂದದ ಬಾಗಿಲು ಮೂವತ್ತಾರು. ಒಂದೊಂದು ಎಂಟೆಂಟೆಂಬ ಘನಕ್ಕೆ ಘನ ಸಂತಸ ಸುಖವಾಯಿತ್ತಯ್ಯಾ. ಇಂದ್ರಿಯಾರ್ಪಣ ಸುಖಗೋಷ್ಠಿ ಸಾಧ್ಯವಾಯಿತ್ತಯ್ಯಾ. ನಿಮ್ಮ ದಯದಿಂದ ಕಪಿಲಸಿದ್ಧಮಲ್ಲಿನಾಥಯ್ಯಾ.