ವಚನ - 389     
 
ಕಂಡೆನು ಎಂದೆಂಬೆ, ಉಂಡುಂಡು ಕಾಬಡೆ ಖಂಡಜ್ಞಾನಿಗಳಾದ ಪಾಪವೇನು? ಮಂಡಳದ ಸುದ್ದಿಯನು ಕಂಡ ಶಿಶುಲೋಕಕ್ಕೆ ಉಂಡುತಿಲ್ಲದೆ ಎಯ್ದಿತಾನಂದದ ಖಂಡೇಂದುಶೇಖರನ ಕಂಡಿದ್ದ ಕೂಟವನು ಕಂಡವರು ಹೇಳಿರೈ ಕಪಿಲಸಿದ್ಧಮಲ್ಲೇಶ್ವರನ.