ವಚನ - 411     
 
ಕರಸ್ಥಲಕೆ ಲಿಂಗ ಬರೆ ಕರಣೇಂದ್ರಿಯಂಗಳಾ ಕರಗಳೆ ಅಯ್ಯನಾ ಪರಿಯಾದವೈ. ಪರಿಯ ಪರಿಯಾ ಒರೆದು ನೋಡುವ ಲೀಲೆ ಪರೀಕ್ಷಿಸುವದೆಲ್ಲವದು ಶುದ್ಧಸಿದ್ಧ ಪ್ರಸಿದ್ಧ ಪರಿಣಾಮವನರಿವಡೆಯು ತವಕಿಗಳಿಗದು ದೂರ. ಗುರುಕರುಣವುಳ್ಳವರ ಹೊಲಬು ತಾನು ಕರುಣಿ ಮಹಾದಾನಿ ಕಪಿಲಸಿದ್ಧಮಲ್ಲಿಕಾರ್ಜುನನ ಜ್ಞಾನ, ಕರಣೇಂದ್ರಿಯವು ಶುದ್ಧ.