ವಚನ - 427     
 
ಕಸವಕೊಂಡು ಹೊಸ ಧಾನ್ಯವ ಕೊಟ್ಟಡೆ, ಒಲ್ಲೆಂಬ ಚದುರರಾರು? ಜಲವ ಕೊಂಡು ಅಮೃತವ ಕೊಟ್ಟಡೆ, ಒಲ್ಲೆಂಬ ಭಾಷೆಯದಾರದು? ಎನ್ನಂತರಂಗದ ಜ್ಞಾನವ ಕೊಂಡು ಸುಜ್ಞಾನವಪ್ಪ ನಿಮ್ಮ ಕರತೇಜವ ಕೊಟ್ಟಡೆ, ಒಲ್ಲೆನೆಂಬ ಪಾತಕಿ ಯಾರು? ಕಪಿಲಸಿದ್ಧಮಲ್ಲಿಕಾರ್ಜುನ ಮಡಿವಾಳ ತಂದೆ.