ವಚನ - 447     
 
ಕಾಲವೇಕೆ ಬಾರದಯ್ಯಾ ಇಂದಿನ ಅವಸ್ಥೆಗೆ? ಲಿಖಿತವೇಕೆ ತೊಡೆಯದಯ್ಯಾ ಇಂದಿನ ಅವಸ್ಥೆಗೆ? ಇಂದಿನಿಸು ಬಾರದೇಕಯ್ಯಾ, ಎನ್ನ ದೇವ ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮಗೆ ಕೂರ್ತ ಅವಸ್ಥೆಯೊಳಗೆ? ಲಿಖಿತ ತೊಡೆಯದು, ಪ್ರಾಣ ಬಿಡದು, ಇಂತಿರಿಸದಿರಾ, ಎನ್ನದೇವರ ದೇವಾ.