ವಚನ - 458     
 
ಕೂಟದ ತುರೀಯದಲಿ ಬೇಟ ಮತ್ತೆರಡಾಗಿ, ಆಟವನು ಆಡಿದೆನು ಚಿತ್ರತರದ. ಕೂಟವೂ ಬೇಟವೂ ಆಟ ಮತ್ತೊಂದಾಗಿ, ನೋಟಂಗಳನಿಮಿಷದ ದೃಷ್ಟಿ ನಟ್ಟು, ತಾನು ತಾನಾಗೀಗ ಸಾನಂದ ಸಂಬಂಧ. ಆನಂದ ಮುಕ್ತ್ಯಂಗನೈಕ್ಯವಾಗಿ ಲೋಕದೊಳಗಿದ್ದು ಲೌಕಿಕನು ತಾನಲ್ಲದೆ ಏಕೈಕನಾದೆ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.