ವಚನ - 514     
 
ಘನಕ್ಕೆ ಘನವಾದ ಪರವಸ್ತು ಲಿಂಗಮೂರ್ತಿ ಬಂದಿತ್ತೆನ್ನ ಕರಸ್ಥಲಕ್ಕೆ. ಬಂದ ಲಿಂಗಮೂರ್ತಿಯಂ ಕಂಡು ಮನ ಹಾರೈಸಿ ತನು ಕರಗಿತ್ತು. ಆ ಲಿಂಗವಂ ಕಂಡು ಕಪಿಲಸಿದ್ಧಮಲ್ಲಿನಾಥನೆನ್ನ ಅಂತರಂಗದಲ್ಲಿದ್ದನು.