ವಚನ - 548     
 
ಜ್ಞಾನಿಗಳು ನಾವೆಂದು ಕಂಡಂತಾಚರಿಸಿದಡೆ ಜ್ಞಾನಿಗಳಲ್ಲ. ಆರೂಢ ನಾವೆಂದು ಕಂಡ ಕಂಡಂತಾಚರಿಸಿ ಕಂಡಲ್ಲಿ ತಿಂದಡೆ ಆರೂಢರೆ ಅವರಲ್ಲ. ಜ್ಞಾನಿಯ ಪರಿ ಬೇರೆ, ಆರೂಢನ ಪರಿ ಬೇರೆ, ಪರಮಹಂಸನ ಪರಿ ಬೇರೆ. ಅರಿತಡೆ ಹೇಳಾ, ಅರಿಯದಿರ್ದಡೆ ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನನ ಸಾನ್ನಿಧ್ಯದಲ್ಲಿ, ಕೇದಾರಯ್ಯಾ.