ವಚನ - 547     
 
ಜ್ಞಾನಿಗಳು ತಾವಾದ ಬಳಿಕ ವಿಶ್ವಾಸಘಾತವ ಮಾಡಬಾರದು. ಜ್ಞಾನಿಗಳು ತಾವಾದ ಬಳಿಕ ಪರದೂಷಣೆ ಮಾಡಬಾರದು. ಜ್ಞಾನಿಗಳು ತಾವಾದ ಬಳಿಕ ಪರದ್ರವ್ಯವನಪಹರಿಸಬಾರದು. ಜ್ಞಾನಿಗಳು ತಾವಾದ ಬಳಿಕ ಗುರುಸೇವೆಯಲ್ಲಿರಬೇಕು ಕಪಿಲಸಿದ್ಧಮಲ್ಲಿಕಾರ್ಜುನಾ.