ವಚನ - 560     
 
ತತ್ವವಾರಾರರಲಿ ಮುತ್ತಿಪ್ಪ ಸೀಮೆಯನು ಹೊತ್ತಿಪ್ಪುದದು ಒಂದು ಬಿಂಬ ನೋಡಾ. ಮೂರರಂ ಮುಕ್ತಿಯಲಿ ಆರರಂ ಸತ್ವದಲಿ ಮೀರಿಪ್ಪುದದು ಭಕ್ತಿಶಕ್ತಿ ನೋಡಾ. ಕ್ರಿಯೆ ಮೂರನು ಮೀರಿ ನಿಃಕ್ರಿಯೆ ಮನೆಯಾಗಿ ಸರ್ವನುಭಾವವು ಶುದ್ಧಜ್ಯೋತಿಯಾಗಿ ರಂಜನೆಯ ಭೇದದಲಿ ರಂಜಿಸುವ ಪ್ರಕಟದಲಿ ಕಂಜಕನ್ನಿಕೆಯ ಸುಮಧ್ಯದಲ್ಲಿ ಅಂಜದೆ ಆನಂದ ಕುಂಜರನ ಮಸ್ತಕದ ರಂಜಿಸುವ ಶುದ್ಧ ಪ್ರಭಾ ಕೋಟಿಯಲಿ ಅಜಲೋಕದಾ ಸುದ್ದಿ ತ್ರಿಜಗವ ಮೂರರಲೊಪ್ಪಿ ನಿಜದಿಂದ ಕಂಡೆ ಕಪಿಲಸಿದ್ಧಮಲ್ಲೇಶ್ವರನ.