ವಚನ - 637     
 
ದೂಷಣೆ ನಿಮಿತ್ತ ಲಿಂಗಧಾರಣಶಿಕ್ಷೆ ಎಂದಲ್ಲಿ, ಬರಿಯ ಪ್ರಾಣಲಿಂಗಿಗಳೆಂದು ದೂಷಣೆಯಾದುದಿಲ್ಲವೆ, ಪುರಾತರ ನುಡಿಯಲ್ಲಿ? ಇದು ಕಾರಣ, ಹಿರಿಯರಿಷ್ಟಲಿಂಗದ ಭಾವ ಧಾರಣಶಿಕ್ಷೆಯಾದಡೆ, ನಿಮ್ಮ ಶರಣ ಲಿಂಗಧಾರಣಶಿಕ್ಷೆ ಮನಮಾಳ್ಪ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.