ವಚನ - 658     
 
ಧರೆಯಗಲದೊಳಗೊಂದು ಹಿರಿದಪ್ಪ ಲೋಭವು ತನುವೆಂಬುದನು ತಾನು ಲೀಯ್ಯಮಾಡಿ ಮನ ಮಗ್ನದೊಳಗೆ ನೆಲೆಗೊಂಡನೆಂದಡೆ ನೆಲಗೊಳ್ಳಲೀಯ್ಯದೆ ತನ್ನ ಮಾಯವ ಮಾಡಿತ್ತು ಕರುಣಾಕರನೆ ಕಳೆದು ಕಾಯಯ್ಯ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಾ.