ವಚನ - 677     
 
ನಾದ ಬಿಂದು ಕಳೆಗಳಲ್ಲಿ ಆದಿಯಾಮೋದವಾದ ಭೇದಾದಿ ಭೇದವನ್ನು ಭೇದಿಸಿಹೆನೆಂದಾನು, ಅಯ್ಯಾ. ವೇಧೆ ವಿಕಳನಾದೆನು ಕಂಡಾ, ಸಾದಾಖ್ಯ ದೇಹದ ಮೀರಿದ ಬ್ರಹ್ಮವಾದೆನು ಕಪಿಲಸಿದ್ಧಮಲ್ಲಿನಾಥಯ್ಯ.