ವಚನ - 691     
 
ನಿಜವ ನಂಬಿದ ಬ್ರಹ್ಮ ಅಜಲೋಕದಲ್ಲಿಪ್ಪ. ಭಜನಾಕ್ಷರದ್ವಯದ ಸಿಂಹಾಸನದ ನೆಲೆಯ ಮೇಲಿಟ್ಟು ಕುರುಹುಗೆಡಬಲ್ಲಡೆ, ತೆರಹಿಲ್ಲ ಕಪಿಲಸಿದ್ಧಮಲ್ಲಿಕಾರ್ಜುನಾ.