ವಚನ - 727     
 
ನೆನೆವರ ಮನದೊಳಗೆ ಮನೆಗಟ್ಟಿಯಿಪ್ಪೆ ನೀನಯ್ಯಾ. ನಂಬಿದ ಶರಣರಿಗೊಲಿದು ಕೈಲಾಸವನೊಲಿದಿಪ್ಪೆ ನೀನಯ್ಯಾ. ನಿಮ್ಮ ನಂಬಲೊಡನೆ ಕೈಲಾಸದಲೊಡಬೀಡಾಗಿಪ್ಪೆಯಯ್ಯಾ, ಎನ್ನ ಕಪಿಲಸಿದ್ಧಮಲ್ಲೇಶ್ವರದೇವ.