ವಚನ - 730     
 
ನೆಲದೊಳಗೆ ಭವಿಸಿತ್ತು ಹಲವು ಪರಿಯ ಬಣ್ಣ ಉಲಿದಾಡುವುದು ದಾಯದಾಯದೊಳಗೆ ಸ್ಥೂಲ ಮೂರಾಕೃತಿಯ ಮೇಲೆ ಸೂಕ್ಷ್ಮ ನಿಂದು ಆ ಸ್ಥೂಲಕ್ಕೆ ಸೂಕ್ಷ್ಮಕ್ಕೆ ಅಂತ ತಾನೆ. ಆರೂಢದಾ ಘನವ ಆರು ಬಲ್ಲವರಯ್ಯ. ಆಲಯವ ಮೀರಿಪ್ಪ ಸಂಬಂಧಿಯಾ. ಭಾಳದಿಂ ಮೇಲಿಪ್ಪ ಕಾರಣದ ಸನುಮತ್ಯ ಆರಾರರಿಂದತ್ತ ಆದನಾ ತಾ ತೋರಿಪ್ಪ ನಿಸ್ಸೀಮ ಆನಂದ ಕಪಿಲಸಿದ್ಧಮಲ್ಲಿಕಾರ್ಜುನಾ.