ವಚನ - 805     
 
ಬಹುಪರಿಯ ಪುಷ್ಪದಲ್ಲಿ ಹೊಸಪರಿಯ ಜಲದಲ್ಲಿ ಎಸೆದಿಪ್ಪ ಲೋಕ ಬ್ರಹ್ಮಾಂಡಗಳ ಮುಸುಕಿಪ್ಪ ಶಕ್ತಿಯ ಹಸಿಯ ಮಸ್ತಕದಲ್ಲಿ ಒಸೆದು ಅರ್ಚಿಪನಾತ ಪರಮಯೋಗಿ. ಸಾಗರದ ಮೇಲಿಪ್ಪ ಯೋಗಪಂಚಮದಲ್ಲಿ ಭೋಗಿಪನು ನಿತ್ಯತೃಪ್ತನಾಗಿ. ಮೇಲಿಪ್ಪ ಕಳೆಗಳಲ್ಲಿ ತೋರಿಪ್ಪ ಸತ್ವದಲ್ಲಿ ತಾನಿಪ್ಪನೈ ಗುರು ಶ್ರೀ ಕಪಿಲಸಿದ್ಧಮಲ್ಲೇಶ್ವರಾ.