ವಚನ - 859     
 
ಮಧ್ಯನದಿಯ ನಾವು ಒಡೆದಡೆ ದುಃಖದಿಂದೇನು? ಜನಕ ಮರಣಹೊಂದಿದಡೆ ಮಾಡಿದ ದುಃಖದಿಂದೇನು? ಧೂಪನಾಗರ ಮುಟ್ಟಿಂದ ಮಾಡಿದ ದುಃಖದಿಂದೇನು? ನಾಗರನಂಗ ಗರುಡನ ಬಾಯಿಗೆ ಬಿದ್ದಂತಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನಾ.