ವಚನ - 917     
 
ಮೂರಕ್ಕೆ ಮುನ್ನೂರಕ್ಕೆ ಆರಕ್ಕೆ ಬೀಜವೈ, ಬೀಜ ಮೂರೊಂದಾಗಿ ಪ್ರಸಾದದಾ ರೂಪು ಪಂಚಬ್ರಹ್ಮ ಮೇಲೆ ಪ್ರಸನ್ನದ ಆಮೋದವಾದೆನೈ ಬಸವಣ್ಣ, ನಿನ್ನ ಕರುಣವು ಇನ್ನು ಮುನ್ನಿನಂತಲ್ಲವೈ, ಇನ್ನು ನಿನ್ನಂತಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.