ವಚನ - 922     
 
ಮೂರರಿಂದವೆ ಮುನ್ನ, ಮೂರು ನಿನ್ನಯ ಸೀಮೆ, ಮೂರು ತಾನೊಂದಾಗಿ ಅತಿ ಪದದಲಿ, ಆರು ಭಕ್ತಿಯು ತನಗೆ ಆರಾರು ತತ್ವದಿಂ ಮೇಲಿಪ್ಪ ಸೀಮೆಗದು ನಿಚ್ಚಣಿಗೆಯೈ ಆನತದ ಗುರು ಕರುಣದಾಜ್ಞೆಯನುವಿಡಿದು ಆನೆಯ್ದೆನು ಗುರುವೆ ಶ್ರೀಕಪಿಲಸಿದ್ಧಮಲ್ಲಿಕಾರ್ಜುನಾ.