ವಚನ - 926     
 
ಮೂರು ಬಲೆಯನು ಇಕ್ಕಿ ಜಾರಿ ಕೆಡಹುವ ಮಾಯೆ ಆರೂಢರೆಂಬವರನೇಡಿಸುವುದು. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಶರಣರಿಗೆ ಅಂಜಿ ನಿಂದಿತು ಮಾಯೆ.