ವಚನ - 939     
 
ಯಮನಿಯಮಾಸನಧ್ಯಾನರೂಢ ಪ್ರಾಣಾಯಾಮ ಪ್ರತ್ಯಾಹಾರವೆಂಬ ಪಂಚಸಮಾಧಿಯಿಂ ಸಿಕ್ಕಿ ಅಜಲೋಕದ ಸುದ್ದಿಯನರಿವವರು ಎತ್ತಾನೊಬ್ಬರು. ಸುಲಭವೆ ಎಲ್ಲರಿಗೆ ಶಿವಲಿಂಗಭಕ್ತಿ? ಸುಲಭವೆ ಎಲ್ಲರಿಗೆ ಗುರುಚರಭಕ್ತಿ? ಸುಲಭವೆ ಎಲ್ಲರಿಗೆ ಜೀವ ಜಂತುವಿನ ಮೇಲೆ ದಯವುಳ್ಳದು? ಶಿವಲಿಂಗಾರ್ಚನೆಯ ಮಾಡಿ ಗುರುಚರಭಕ್ತಿ ಅಳವಟ್ಟ ಬಳಿಕ ಸರ್ವವು ತಾನಾಗಿರಬೇಕು. ಸದಾಚಾರ ಶಿವಾಚಾರ ನಿಹಿತಾಚಾರ ದಯಾಚಾರವುಳ್ಳವರಿಗೆ ಸರ್ವಯೋಗವಪ್ಪುದು; ಅವ್ಯಯಂಗೆ ಯೋಗ್ಯರಪ್ಪರು ನಿಮ್ಮ ಕೂಡಿ ದ್ವಯವಿಲ್ಲದೆ ಏಕವಪ್ಪರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.