ವಚನ - 974     
 
ವಾದ ಬುದ್ಧಿಯ ಬಲ, ವಾದ ಅಭ್ಯಾಸದ ಬಲ; ಮಹತ್ವ ಸುಕೃತದ ಫಲ, ಮಹತ್ವ ಸಿದ್ಧಿಯ ಬಲ; ಅರಿವು ಜ್ಞಾನದ ಬಲ, ಅರಿವು ಸಜ್ಜನಸಹವಾಸದ ಬಲ. ಅರಿವು ಬಾಹ್ಯದಲ್ಲಿ ಇಷ್ಟಲಿಂಗ, ಅರಿವು ಅಂತರಂಗದಲ್ಲಿ ಪ್ರಾಣಲಿಂಗ, ಅರಿವು ಭಾವದಲ್ಲಿ ಆತ್ಮಲಿಂಗ. ಇದು ಕಾರಣ, ವಾದಿಸಿದಲ್ಲಿ ಹುರುಳಿಲ್ಲ, ಮಹತ್ವ ಮಾಡುವಲ್ಲಿ ಹುರುಳಿಲ್ಲ. ಲಿಂಗಜ್ಞಾನವೇ ಹುರುಳು, ಕಪಿಲಸಿದ್ಧಮಲ್ಲಿಕಾರ್ಜುನಾ.