ವಚನ - 990     
 
ಶಮೆದಮೆಶಾಂತಿಯ ನಡುವೆ ಜ್ಞಾನಾಗ್ನಿಯೊಡನೊಡನೆ ಬೆಳಗುತಿಪ್ಪುದಗ್ನಿ ತಾ. ನುಡಿಯ ಬ್ರಹ್ಮದವರಿಗೆ ಬಿಡದೆ ಸುಟ್ಟಿತ್ತು ಅಗ್ನಿ, ಮೃಡಕರುಣವುಳ್ಳವರಿಗೆ ಶಾಂತವಾಗಿ, ಎನ್ನೊಡೆಯ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಒಡಗೂಡಿದಾತಂಗೆ ಶಾಂತವಾಗಿ.