ವಚನ - 1103     
 
ಸ್ಥೂಲ ಸೂಕ್ಷ್ಮ ಕಾರಣವೆಂಬ ತನುಗಳ ಭೇದಂಗಳ ಭೇದಿಸುವ ಪರಿಯನರಿದೆನಯ್ಯಾ ನಿಮ್ಮಲ್ಲಿ. ನೀ ಕಾರಣತನುವಾಗಿಪ್ಪಲ್ಲಿ ಅರಿದೆ. ಮಹಾಕಾರಣವ ಅರಿದು ಅನಾಮಯನಾದೆ. ಸ್ಥೂಲದಲ್ಲಿ ಶುದ್ಧನಾದೆ, ಸೂಕ್ಷ್ಮದಲಿ ಸಿದ್ಧನಾದೆ, ಕಾರಣದಲಿ ಪ್ರಸಿದ್ಧನಾದೆ. ನಿಮ್ಮ ಕರುಣಕಾನನದಲಿ ಕಂಗೆಟ್ಟೆ, ಕಪಿಲಸಿದ್ಧಮಲ್ಲಿಕಾರ್ಜುನಾ.