ವಚನ - 1192     
 
ಅಂಗಲಿಂಗಸಂಬಂಧಿಯಾದ ಬಳಿಕ ಗುರುವಿನನುಮತದಿಂದ ಸ್ವಾನುಭಾವಲಿಂಗಸಂಬಂಧಿಯಾದ ಬಳಿಕ, ಪ್ರಾಣನಿರ್ಪ ನೆಲೆಯನರಿ. ಆ ಲಿಂಗಮಜ್ಜನೋದಕದಿಂದ ನಿನ್ನ ಕಾಯಶುದ್ಧಿ; ಆ ಲಿಂಗನಿರೀಕ್ಷಣೋದಕದಿಂದ ನಿನ್ನ ಅವಯವಶುದ್ಧಿ; ಆ ಲಿಂಗಪ್ರಸಾದೋದಕ ನಿನ್ನ ಪರಮಪದವು. ಇಂತು ಪಾದೋದಕತ್ರಯದಲ್ಲಿ, ಸುಖಿಯಾಗಿ , ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ ನಿತ್ಯನಾಗು ಸಂದೇಹವಿಲ್ಲದೆ.