ವಚನ - 1202     
 
ಪೂಜಿಸಹೋದಡೆ ಪೂಜಾಪದಾರ್ಥವಿಲ್ಲದಂತಾಯಿತ್ತಯ್ಯಾ, ನಮ್ಮ ಚೆನ್ನಬಸವೇಶ್ವರ ಗುರುವಿನ ಬೋಧೆಯಿಂದ. ಮಾಡಿಸಹೋದಡೆ ಮಾಡುವ ರೂಪು ಇಲ್ಲದಂತಾಯಿತ್ತಯ್ಯಾ, ಅಲ್ಲಮನ ವಚನದಿಂದ . ಇದರಿರವ ತಿಳಿಯಬೇಕೆಂದು ಹೋದಡೆ ಆನು ಕಾಣೆ, ಕಪಿಲಸಿದ್ಧಮಲ್ಲಯ್ಯಾ.