ವಚನ - 1209     
 
ವೇದ ವೇದಾಂತವನೋದಿದವರೆಲ್ಲ ನಿರಂಜನರಾದಡೆ, ಜನರಾರೊ ಈ ಲೋಕದಲ್ಲಿ? ಸಿದ್ಧಾಂತವ ಸಾಧಿಸಿದವರೆಲ್ಲ ದೇವರಾದಡೆ, ಸುರರಾರೋ ಸ್ವರ್ಗದಲ್ಲಿ? ವೇದಾಂತವಳವಟ್ಟಿತ್ತು ಪ್ರಥಮರಿಗೆ, ಸಿದ್ಧಾಂತವಳವಟ್ಟಿತ್ತು ಒಬ್ಬೊಬ್ಬರಿಗೆ. ಈ ಎರಡರ ಕೀಲವಳವಟ್ಟಿತ್ತು ಎನ್ನ ಗುರು ಚೆನ್ನಬಸವಣ್ಣಂಗೆ, ಕಪಿಲಸಿದ್ಧಮಲ್ಲಿಕಾರ್ಜುನಾ.