ವಚನ - 1215     
 
ಮಣಿಗಳಿಗೆ ಎಜ್ಜ ಹಿಡಿಯುವರಲ್ಲದೆ, ಮನಕ್ಕೆ ಎಜ್ಜ ಹಿಡಿಯುವರಾರೂ ಇಲ್ಲ. ವ್ಯಾಧಿಗೆ ಔಷಧವ ಕೊಡುವವರಲ್ಲದೆ, ಮರಣಕ್ಕೆ ಔಷಧವ ಕೊಡುವವರಾರೂ ಇಲ್ಲ. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಗರ್ಭದೊಳು ಪ್ರಮಥ ಚಿಂತಾಮಣಿ ಚೆನ್ನಬಸವಣ್ಣನಲ್ಲದೆ ಮತ್ತಾರೂ ಇಲ್ಲ.