ವಚನ - 1246     
 
ತೆರೆಹಿಲ್ಲದ ಘನವು ಕುರುಹಿಂಗೆ ಬಂದ ಕಾರಣವೇನು ಹೇಳಾ, ಎಲೆ ಅಯ್ಯಾ, ಭಕ್ತಿ ಕಾರಣ. ಇಚ್ಛೆಗೆ ಬಂದ ಬಳಿಕ ಉಪಚಾರಕ್ಕೆ ತೆರಹುಂಟೆ ? ಕಪಿಲಸಿದ್ಧಮಲ್ಲಿನಾಥಾ, ಬಿಜಯಮಾಡಾ, ಕರುಣಿಗಳರಸಾ.