ವಚನ - 1427     
 
ಗುರುಲಿಂಗ ಬಸವಣ್ಣ, ಚರಲಿಂಗ ಬಸವಣ್ಣ, ಕರುಣಾಕರನು ಚೆನ್ನಬಸವಣ್ಣನು. ಶರಣಸ್ಥಲದ ಕಲ್ಪಸುರಭೂಜ ಫಲವಿತ್ತ ಕರುಣಾಕರನು ಚೆನ್ನಬಸವಣ್ಣನು. ಆ ಬಸವಣ್ಣನ ಕೃಪೆಯಿಂದ ಆದಿ ಅಕ್ಷರವರಿದು ಸಾಧಿಸಿದೆ ನಿಮ್ಮುವನು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.