ವಚನ - 1610     
 
ಮಹೇಶನಾದೆನೆಂಬ ಬಿಂಕವು ಮನದರುಹಿನಲ್ಲಿ ಅಡಗಿರಬೇಕು. ಭಕ್ತನಾದೆನೆಂಬ ಬಿಂಕವು ಸೈರಣೆಯ ರೂಹಿನಲ್ಲಿ ಮನೆಮಾಡಿಕೊಂಡಿರಬೇಕು. ಮಹೇಶನಾದವ ಒಬ್ಬನು ತೋರಲಿಲ್ಲ; ಭಕ್ತನಾದವನ ಅಂದಂದಿಗೆ ನೋಡಲಿಲ್ಲ ಕಂಡೆಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.