ವಚನ - 1637     
 
ಮನವಿದ್ದಲ್ಲಿ ಮಹಾದೇವನಿಪ್ಪ. ಮನವಿದ್ದಲ್ಲಿ ಮಹಾದೇವನಿಲ್ಲವೋ ಅಯ್ಯಾ? ಯಾತ್ರಾರ್ಥವಾಗಿ ಬಂದವರು ಬಯಲಲ್ಲಿ ಬಯಲ ಬಿಟ್ಟು ಬಯಲಾರಿಸುವಂತೆ- ಮನೋವ್ಯಾಪಾರಕ್ಕದರಂತೆ ಇಪ್ಪ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.