ವಚನ - 1655     
 
ಕ್ರಿಯೆಗಳಲ್ಲಿ ಭೇದವಲ್ಲದೆ ಜ್ಞಾನದಲ್ಲಿ ಭೇದವಿಲ್ಲವಯ್ಯಾ. `ಕ್ರಿಯಾಸು ಶತಶೋಭೇದಾ ಜ್ಞಾನಮೇಕ ವಿರಾಜತೇ| ಸುರುಚೀನಿ ಪದಾರ್ಥಾನಿ ಜಿಹ್ವ್ಯೆಕ್ಯವ ವಿರಾಜತೇ||' ಎಂಬುಪನಿಷತ್ತು ಹುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.