ವಚನ - 1712     
 
ಗುರು ಏರಿದ ಮಂಚವನೇರಿದೆನಾದಡೆ, ಕಾಲ್ಗಳು ಹರಿದು ಹೋಗಲಿ ದೇವಾ. ಗುರು ಹೊದ್ದ ವಸ್ತ್ರವ ಹೊದ್ದೆನಾದಡೆ, ಚರ್ಮವು ಸುಲಿದು ಹೋಗಲಿ ದೇವಾ. ಗುರು ಮುಟ್ಟಿದ ಪದಾರ್ಥವ ಮುಟ್ಟಿದೆನಾದಡೆ, ಪುಳುಗೊಂಡವ ಮಾಡಲಿ ಕಪಿಲಸಿದ್ಧಮಲ್ಲಿಕಾರ್ಜುನದೇವ.