ವಚನ - 1742     
 
ಕೆರೆಯಲ್ಲಿಯ ತೀರ್ಥ, ಮನದಲ್ಲಿಯ ಸರ್ವ ಜೀವದಯಾಪರತ್ವ ಮೈದೆಗೆದಡೆ, ನಿಮ್ಮ ಪಾದಸಾಕ್ಷಿ ಎನ್ನ ಮನಸಾಕ್ಷಿ, ನಮ್ಮೀರ್ವರ ಮುಂದೆ ಕೇದಾರ ಗುರುಗಳೆ ಸಾಕ್ಷಿ, ಕಪಿಲಸಿದ್ಧಮಲ್ಲಿಕಾರ್ಜುನಾ.