ವಚನ - 1763     
 
ಭಕ್ತನಾಗಿ ಮಲತ್ರಯಂಗಳೊಳಾಳುವುದು ಲೇಸು ಕಂಡೆಯಾ, ಮನವೆ; ಜಂಗಮವಾಗಿ ಮಲತ್ರಯಂಗಳಳಿವುದು ದುರ್ಲಭ ಕಂಡೆಯಾ, ಭಕ್ತ ಮಹೇಶ ಪ್ರಸಾದಿಸ್ಥಲತ್ರಯಂಗಳ ಮೀರಿ, ಪ್ರಾಣಲಿಂಗಿಸ್ಥಲದಲ್ಲಿ ನಿಂದೆಯಲ್ಲಾ, ಮನವೆ. ಇನ್ನು ಮೈದೆಗೆದು ತಿರಿದುಂಡಡೆ, ಬೆನ್ನ ಬಾರನೆತ್ತುವ ನೋಡಾ, ಮನವೆ; ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಭೂಪಾಲನು.