ವಚನ - 1831     
 
ಆವನಾದಡೇನು, ಭಾವದಲ್ಲಿ ಪ್ರೀತನಲ್ಲದೆ ನಡೆ ನುಡಿ ಗಡಣದಲ್ಲಿ ಪ್ರೀತಿಯುಂಟೆ ದೇವಾ. ಅರಸನಾದಡೇನು, ಆಳುವಲ್ಲಿ ಅಧಿಕಾರಿಯಲ್ಲದೆ ಅಳಿವಲ್ಲಿ ಅಧಿಕಾರಿಯುಂಟೆ ದೇವಾ? ಭಕ್ತನಾದಡೇನು, ಭಕ್ತನಲ್ಲಿ ಸಲುಗೆಯಲ್ಲದೆ ಮಹೇಶನಲ್ಲಿ ಸಲುಗೆಯುಂಟೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನದೇವಾ.