ವಚನ - 1832     
 
ಭಕ್ತನಾದ ಬಳಿಕ ಭಕ್ತಿವಿಡಿದಾಚರಿಸುವುದೆಂತಯ್ಯಾ? ಭಕ್ತ ತಾನಾದ ಬಳಿಕ ಭಕ್ತಿಯ ಹೊಲಬನರಿಯಬೇಕು. ಭಕ್ತ ತಾನಾದ ಬಳಿಕ ಜ್ಞಾನಕ್ರಿಯಾವಿವರವ ವಿಚಾರಿಸಿ, ನೋಡಬೇಕು. ಭಕ್ತ ತಾನಾದ ಬಳಿಕ ಅರುಹಿನ ಕುರುಹುವಿಡಿದಾಚರಿಸಬೇಕು. ಭಕ್ತ ತಾನಾದ ಬಳಿಕ ತಾಪತ್ರಯಕ್ಕೊಳಗಾಗದೆ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಐಕ್ಯ ಹೊಂದಲೇಬೇಕು.