ವಚನ - 1862     
 
ಆಕಾರವಿಲ್ಲದ ಮೂರ್ತಿಯ ಆಕಾರಕ್ಕೆ ತಂದು ಪೂಜಿಸಿದೆ ನೋಡಾ, ಮನವೆ. ಆಕಾರದ ಮೂರ್ತಿಯ ನಿರಾಕಾರಕ್ಕೆ ತಂದು ಪೂಜಿಸಲರಿಯೆ ನೋಡಾ, ಮನವೆ. `ಯದ್ದೃಷ್ಟಂ ತನ್ನಷ್ಟಂ' ಎಂದ ಬಳಿಕ, ನಿರಾಕಾರ ನಿಜನಿರ್ವಯಲವೆ ಸ್ಥಿರವೆಂದು ನಂಬು ಮನವೆ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.