ವಚನ - 1931     
 
ನಿರಾಕಾರ ಪರವಸ್ತು ತಾನೆಂದರಿದಡೆಯು ಕಿರಿದಾಗಿ ನುಡಿಯಲೆಬೇಕು, ಗುರುದೇವಾ. ಜಡದೇಹಿ ನಾನೆಂಬರುಹು ಉಳ್ಳವಂಗಾದಡೆಯು ಅರುಹಿಕೊಡಲೆ ಬೇಕು, ಸಜ್ಜನರವರು ಗುರುದೇವಾ, ಮಹಾಮಹಿಮ ಕಪಿಲಸಿದ್ಧಮಲ್ಲಿಕಾರ್ಜುನದೇವಾ.