ವಚನ - 1937     
 
ಅರುಹಿನ ಆಚರಣೆಯಿದು ಕುರುಹಿನ ಕರುಮಾಡ ನೋಡಾ, ಲಿಂಗಯ್ಯಾ. `ಕ್ರಿಯಾsಪಿ ಜ್ಞಾನೇನ ವರ್ತತೇ' ಎಂದ ಬಳಿಕ, ಅರುಹು ಬೇಕು ಆಚರಣೆಯಲ್ಲಿ, ಮರಹು ಬೇಕು ವಿಷಯಂಗಳಲ್ಲಿ. ಈ ಅರುಹಿನ ಮರವೆಯ ಶರಣನ ಕಂಡು ಕಣ್ದೆರಹುವ ಕಪಿಲಸಿದ್ಧಮಲ್ಲಿಕಾರ್ಜುನನು.