ವಚನ - 108     
 
ತಾಯಿ ಬಂಜೆಯಾದಲ್ಲದೆ ಶಿಶು ನಷ್ಟವಾಗದು. ಬೀಜ ನಷ್ಟವಾದಲ್ಲದೆ ಸಸಿ ನಷ್ಟವಾಗದು. ನಾಮ ನಷ್ಟವಾದಲ್ಲದೆ ನೇಮ ನಷ್ಟವಾಗದು. ಮೊದಲು ಕೆಟ್ಟಲ್ಲದೆ ಲಾಭದಾಸೆ ಬಿಡದು. ಗುಹೇಶ್ವರನೆಂಬ ಲಿಂಗದ ನಿಜವನೆಯ್ದುವಡೆ, ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು.