ವಚನ - 110     
 
ಸತ್ತ ಬಳಿಕ ಮುಕ್ತಿಯ ಹಡೆದೆಹೆನೆಂದು ಪೂಜಿಸ ಹೋದಡೆ, ಆ ದೇವರೇನ ಕೊಡುವರೊ? ಸಾಯದೆ ನೋಯದೆ ಸ್ವತಂತ್ರನಾಗಿ, ಸಂದುಭೇದವಿಲ್ಲದಿಪ್ಪ ಗುಹೇಶ್ವರಾ ನಿಮ್ಮ ಶರಣ.