ವಚನ - 1154     
 
ಗುರುತತ್ತ್ವದಲ್ಲಿ ಹುಟ್ಟಿ, ಶಿವತತ್ತ್ವದಲ್ಲಿ ಬೆಳೆದು ಪರತತ್ತ್ವದಲ್ಲಿ ಮಗ್ನವಾದ ಶರಣಂಗೆ ಕಾಯವಿಡಿದಡೇನು? ಕಾಯವಳಿದು ನಿರ್ವಯಲಾದಡೇನು? ಕಾಯಸಮಾಧಿ ಕರಣಸಮಾಧಿ ಭಾವಸಮಾಧಿಯಾದ ಬಳಿಕ, ಗುಹೇಶ್ವರಲಿಂಗದಲ್ಲಿ ಬಯಲಭ್ರಮೆಯ ಕಳೆದು ಸುಜ್ಞಾನ ಸಮಾಧಿಯನೆಯ್ದಬಲ್ಲಡೆ ಅದೇ ನಿಜಸಮಾಧಿ ಕೇಳಾ ಸಿದ್ಧರಾಮಯ್ಯಾ.