ವಚನ - 1314     
 
ನೆಲೆಗಾಂಬನ್ನಕ್ಕರ ತೊರೆಯ ಅಂಜಿಕೆಯೈಸೆ? ನೆಲೆಗಂಡ ಬಳಿಕ ತೊರೆ ಬರುದೊರೆಯಲ್ಲದೆ ಅಂಜಿಕೆಯಿಲ್ಲ. ಮನವುಳ್ಳನ್ನಬರ ಕರ್ಮದ ಕೋಟಲೆಯೈಸೆ? ಮನವಳಿದ ಬಳಿಕ ಕರ್ಮ ನಿಃಕರ್ಮವಲ್ಲದೆ ಬೇಕು ಬೇಡೆಂಬ ಸಂದೇಹವುಂಟೆ, ಗುಹೇಶ್ವರಾ, ನಿಮ್ಮ ನಿಜವನರಿದ ಶರಣಂಗೆ?