ವಚನ - 367     
 
ಒಂದೊಂದು ಮಠದಲ್ಲಿ ತುಂಬಿ ಒಂಬತ್ತರಾಳಾಪ ಸಂಭ್ರಮ ಮೊರೆವುತದೆ ಅಯ್ಯಾ. ಆನತದ ಮೀರಿಪ್ಪ ಮೇಣು ಆದಿಯ ಆಧಾರದಿಂದತ್ತಲಿ ತುಂಬಿದಾ ಕೊಡದಲಿ ಒಂದು ಬಿಂದು ಭವಿಸಲು ಸಂದುದಖಿಳ ಬ್ರಹ್ಮಾಂಡವು. ಎನ್ನ ತಂದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನಿಮ್ಮ ಭಕ್ತಿಯಾದಂದ ವಾರುಧಿಯ ಪರಿಯಾಯ.