ವಚನ - 429     
 
ಕಳೆಯೊಳಗಣ ಭೇದ, ಕಳೆ ನಾದದ ಭೇದ ಕಳಾವಿದರಿಗಲ್ಲದೆ ವೇದ್ಯವಲ್ಲ. ಮಧುಕರನುಂಡಿಪ್ಪ ಸದಮದದ ಪರಿಮಳವ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಲ್ಲ.