ವಚನ - 445     
 
ಕಾಲಕರ್ಣಿಕೆಯನ್ನು ಮೀರಿಪ್ಪನೆಮ್ಮ ನಲ್ಲ ತೋರಿ ಬಿಡನಾಕೆಯ ಸಂಗಂಗಳಾ. ಕ್ರೀಗಳನು ನಿಃಕರಿಸಿ ನಿಃಕ್ರಿಯೆ ನೆಲೆಗೊಳಿಸಿ, ಆರು ವರ್ಗದಲಾತನೈಕ್ಯನಾಗಿ, ಸಂಬಂಧ ಸಮನಿಸಿಯು ಕರ್ಮವನು ಅತಿಗಳೆದು ಸೊಮ್ಮಾತನಿಹತತಾ ಪರತತ್ವದಾ ನಿಃಕರ್ಮಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಕರ್ಮದೊಳಗೆ ತಾ ಕರ್ಮಿಯಾದ.