ವಚನ - 454     
 
ಕುಡಿ ನಿಮಿರ್ದ ದಾಡೆಗಳ ಅಸುರಗಣದೃಷ್ಟಿಯ ಹರಹು ಮಂಡೆಯ ಕೆಲಬಲದೊಂದು ದಾಡೆ ಆಕಾಶವನಳ್ಳಿರಿವುದು, ಒಂದು ದಾಡೆ ಭೂಮಿಯನುತ್ತರಿಸುವುದು. ಭೂಮಿ ಭೂತಕೋಟಿಯಾಗಿ ಸುತ್ತಿದಡೆ ಉದ್ದಂಡ. ಭೂತ ತೊಂಡಾಣೆಯ ಮಾಣಿಸಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ನೀ ಸದ್ಧರ್ಮಿಯಾದಡೆ ಅಯ್ಯಾ.